ಪ್ರಕೃತಿ ಜನ್ಯ

ವೀರಪಂಡಿತ ಶಾಸ್ತ್ರಕಾರರೆ
ಜ್ಞಾನನಿಧಿ ಋಷಿವರ್ಯರೆ,
ಹಿಂದೆ ಗತಿಸಿದ ಯೋಗಪುರುಷರೆ
ನಿಮ್ಮ ಕಷ್ಟವ ನೆನೆವೆನು

ನಿಬಿಡವಾಗಿದೆ ನೀವು ರಚಿಸಿದ
ಗ್ರಂಥರಾಶಿಯು ಧರೆಯೊಳು
ಸೃಷ್ಟಿಯಂತ್ರವ ಭೇದಿಸುವ ಘನ
ಮಥನ ರವವಿದೆ ಅದರೊಳು

ಬಂದು ಇಲ್ಲಿಗೆ ಭ್ರಾಂತರಾದಿರೊ
ಏನಿದೆನ್ನುತ ಕುಳಿತಿರೋ
ದೀರ್ಘಯೋಚನೆ ಗೆಯ್ದು ಶೋಧಿಸಿ
ಸಾಧ್ಯವಲ್ಲಿದು ಎಂದಿರೊ

ಸುಂದರದ ಈ ಕೃತಿಯ ಪರಿಕಿಸಿ
ಹಿಗ್ಗಿ ಸಂತಸಗೊಂಡಿರೊ
ಮುಂದೆ ನಡೆಯುತ ಸೋತಿರೋ, ಆ-
ನಂದವನೆ ಸವಿದುಂಡಿರೊ

ಸಿಹಿಯನುಂಡಿರೊ ಕಹಿಯನುಂಡಿರೊ
ಮೂಲವರಿಯದೆ ನೊಂದಿರೊ
ಗೆಯ್ದ ಗೆಮ್ಮೆಯ ಫಲವ ಕಾಣುವ
ಮೊದಲಿಗೇ ಮರೆಯಾದಿರೊ

ಯಾರು ಬಲ್ಲರು ನಿಮ್ಮ ಕಷ್ಟವ
ಸಾಧ್ಯವೇನದು ತಿಳಿಯಲು
ಪ್ರಕೃತಿಜನ್ಯವಿದಿಂತು ಸಾಗಿರೆ
ಜನಕಜೆಯು ಏಗೆಯ್ವಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾ ಬಾ ಓ ಬೆಳಕೇ
Next post ಮರದ ವ್ಯಥೆ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys